top of page

ಸಮಯದ ಅಭಾವದಿಂದ ದೇವರ ಧ್ಯಾನ ಮಾಡುವುದು ಹೇಗೆ - ಸಂತ ಕಬೀರ್ ದಾಸರು

  • ಸನಾತನ ವಿಚಾರ
  • Nov 18, 2017
  • 2 min read

ಸಂತ ಕಬೀರ್ ದಾಸರು

ಕಬೀರ ದಾಸರು ಹಾಗು ಜಯಂತ ಆಚಾರ್ಯ

ಸಂತ ಕಬೀರ ದಾಸರು ಆ ಸಮಯದಲ್ಲಿ ಬಟ್ಟೆಯನ್ನು ನೇಯುತ್ತಿದ್ದರು, ಏಕೆಂದರೆ ಅವರು ವೃತ್ತಿಯಿಂದ ನೇಕಾರರಾಗಿದ್ದರು | ಕಾಶಿಯ ಒಬ್ಬ ಪ್ರಸಿದ್ದ ವಿದ್ವಾಂಸ ಜಯಂತ ಆಚಾರ್ಯ ಕಬೀರರನ್ನು ಭೇಟಿಯಾಗಲು ಬರುತ್ತಿದ್ದರು | ಅವರು ಕಬೀರರ ಅಗಾದವಾದ ಆಧ್ಯಾತ್ಮಿಕ ಜ್ಞಾನ ಹಾಗು ಸಂತ ಶ್ರೇಷ್ಟತೆಯ ಬಗ್ಗೆ ಇದ್ದ ಪ್ರಖ್ಯಾತಿಯನ್ನು ಕೇಳಿ ಬಂದಿದ್ದರು | ಅವರು ಯೋಚಿಸತಿದ್ದರು ವಿಶೇಷವಾದ ವಸ್ತ್ರ ವಿನ್ಯಾಸ ಹಾಗು ದೊಡ್ಡ ಬಂಗಲೆಯಲ್ಲಿ ಇರಬಹುದೆಂದು | ಆದರೆ ಅವರು ಬಂದು ನೋಡಿದಾಗ ಕಬೀರರು ಅತ್ಯಂತ ಸರಳ ಸಾಧಾರಣ ವ್ಯಕ್ತಿವುಳ್ಳವರಾಗಿದ್ದರು ಹಾಗು ಸರಳ ಉಡುಪನ್ನು ತೊಟ್ಟಿದ್ದರು, ಚಿಕ್ಕ ಕಟಿರದ್ದಲ್ಲಿ ವಾಸವಾಗಿದ್ದರು | ಅವರ ಜೊತೆ ಸಂಭಾಷಣೆಯನ್ನು ನಡೆಸಿದ ನಂತರ ಗೊತ್ತಾಗಿದ್ದು ಅವರ ತುಂಬಾ ಸರಳ ಸಜ್ಜನ ವ್ಯಕ್ತಿ ಎಂದು ಮತ್ತು ದಿನ ಪ್ರತಿಯು ಲೌಕಿಕವಾದ ಕಾರ್ಯದಲ್ಲಿ ತೊಡಗಿರುತ್ತಾರೆ ಹೀಗೆ ತಿಳಿದು | ತಡೆಯಲಾಗದೆ ಅವರು ಕಬೀರರನ್ನು ಹೀಗೆಂದು ಪ್ರಶ್ನಿಸಿದರು, ನೀನು ದಿನ ಪ್ರತಿಯು ಬಟ್ಟೆಯನ್ನು ನೇಯುತ್ತಿರುತ್ತಿರಿ, ಆದರೆ ಈಶ್ವರನ ಸ್ಮರಣೆಯನ್ನು ಯಾವಾಗ ಮಾಡುತ್ತಿರಿ ? ಕಬೀರರು ಜಯಂತ ಆಚಾರ್ಯರನ್ನು ತಮ್ಮ ಕುಟಿರದಿಂದ ಹೊರಗೆ ಕರೆದುಕೊಂಡುಹೋಗಿ, ನೀವು ಇಲ್ಲಿ ನಿಂತು ಕೊಳ್ಳಿ ಎಂದರು |

ನಿಮ್ಮ ಪ್ರಶೆಗೆ ಉತ್ತರ ಕೊಡಿವುದಿಲ್ಲ, ಅದನ್ನು ನೈಜವಾಗಿ ತೊರಿಸುತ್ತೇನೆ | ಕಬೀರರು ಅವರಿಗೆ ಒಬ್ಬ ಹೆಣ್ಣುಮಗಳು ತಲೆಯ ಮೇಲೆ ನೀರಿನ ಕೊಡವನ್ನು ಇಟ್ಟುಕೊಂಡು ಹೋಗುವ ದೃಶ್ಯವನ್ನು ತೋರಿಸಿದರು | ಅವಳ ಮೊಗದಲ್ಲಿ ಪ್ರಸನ್ನತೆಯ ಛಾಯೆ ಹಾಗು ನಡಿಗೆಯಲ್ಲಿ ವೇಗವಿತ್ತು | ತಲೆಯ ಮೇಲಿನ ನೀರಿನ ಕೊಡವನ್ನು ಅವಳು ಕೈಯಿಂದ ಹಿಡಿದಿರಲಿಲ್ಲ, ಆದರು ಸಹ ತನ್ನ ಸಮತೋಲನವನ್ನು ಕಾಯ್ದು ಕೊಂಡಿದ್ದಳು | ಕಬೀರರು ಜಯಂತ ಆಚಾರ್ಯರಿಗೆ ಹೇಳಿದರು, ಆ ಹೆಣ್ಣುಮಗಳನ್ನು ನೋಡಿ | ಅವಳು ಅವಶ್ಯವಾಗಿ ಯಾವುದೊ, ಒಂದು ಗೀತೆಯನ್ನು ಪಿಸಿಗುಡು ತಿಹಳು | ಬಹುಶಾ ಅವಳು ಯಾರೋ ಅವಳ ಪ್ರೀತಿ ಪಾತ್ರವಾದವರು ಮನೆಗೆ ಬಂದಿರಬಹುದು | ಅದಕ್ಕೆ ಅವರಿಗೆ ಧಾಹವಾಗಿರುವ ಕಾರಣ ನೀರು ತೆಗೆದುಕೊಂಡು ಹೋಗುತಿರಬಹುದು ಈಗ ಹೇಳಿ ಅವಳಿಗೆ ತಲೆಯ ಮೇಲಿದ್ದ ನೀರಿನ ಕೊಡದ ನೆನಪಿರ ಬಹುದೋ ಅಥವಾ ಇಲ್ಲವೋ ? ಜಯಂತ ಆಚಾರ್ಯರು ಉತ್ತರಿಸಿ ಅವಳಿಗೆ ಏನಾದರು ಕೊಡದ ಬಗ್ಗೆ ನೆನೆಪಿಲ್ಲದಿದ್ದರೆ, ಇಷ್ಟರಲ್ಲಾಗಲೇ ನೀರಿನ ಕೊಡವು ಭೂಮಿಪಾಲಾಗುತ್ತಿತ್ತು |

ಈ ಮಾತನ್ನು ಕೇಳುತ್ತಲೇ ಒಂದು ಕ್ಷಣವೂ ತಡಮಾಡದೇ ಹೇಳಿದರು, ಈ ಸಾಧಾರಣ ಹೆಣ್ಣುಮಗಳು ತಲೆಯ ಮೇಲೆ ಕೊಡವನ್ನು ಇಟ್ಟುಕೊಂಡು ಯಾವ ಸಹಾಯವು ಇಲ್ಲದೆ ಸಂತೆಯಲ್ಲೂ ಸಹ ಅವಳ ಗುರಿಯನ್ನು ಮುಟ್ಟುತ್ತಾಳೆ | ಖುಷಿಯಿಂದ ಗೀತೆಯನ್ನು ಹಾಡುತ್ತಾಳೆ ಆದರು ಸಹ ಕೊಡದ ನೆನಪು ಅವಳ ಮನದಲ್ಲಿ ಸಹಜವಾಗಿಯೇ ಇರುವುದು | ಈಗಲು ನೀವು ಹೇಳಬಯಸುತ್ತಿರೆನು, ಪರಮಾತ್ಮನ ಸ್ಮರಣೆಗಾಗಿ ನಮಗೆ ಪ್ರತ್ಯೇಕವಾಗಿ ಸಮಯವನ್ನು ತೆಗೆದಿಡುವುದು ಅಗತ್ಯವೆಂದು ? ಬಟ್ಟೆಯನ್ನು ನೇಯುವ ಕೆಲಸ ಶರೀರ ಮಾಡುತ್ತದೆ, ಆತ್ಮನಲ್ಲಾ | ಆತ್ಮವು ಅಮರವು, ಅನಂತವು, ಅದು ಎಂದಿಗೂ ನಾಶವಾಗುವುದಿಲ್ಲ, ಅದಕ್ಕಾಗಿ ಈ ಕೈಗಳು ಸಹ ಉಲ್ಲಾಸದಿಂದ ಬಟ್ಟೆಯನ್ನು ನೇಯುವ ಕೆಲಸ ಮಾಡುತ್ತದೆ, ಹಾಗು ಈಶ್ವರನ ಧ್ಯಾನದಲ್ಲಿ ಮನಸ್ಸು ಸದಾ ಮುಳುಗಿರುತ್ತದೆ |


 
 
 

Comentários


Featured Posts
Check back soon
Once posts are published, you’ll see them here.
Recent Posts
Archive
Search By Tags
Follow Us
  • Facebook Basic Square
  • Twitter Basic Square
  • Google+ Basic Square

(ಶ್ರೀ ಮಠದ ವಿಳಾಸ)

ಶ್ರೀ ಶರೀಫ್ ಶಿವಯೋಗಿ ಹಾಗು ಶ್ರೀ ಗುರು ಗೋವಿಂದ ಶಿವಯೋಗಿ

ಪಂಚಾಗ್ನಿ ಮಠ ಟ್ರಸ್ಟ್ ಶಿಶುವಿನಹಾಳ

ತಾ|| ಶಿಗ್ಗಾಂವ  ಜಿ|| ಹಾವೇರಿ, ಕರ್ನಾಟಕ

ಶ್ರೀ ಮಠದ ದೂರವಾಣಿ ಸಂಖೆ :- (8884578780)

@2023 ಸನಾತನ ವಿಚಾರ ಇವರ ಹೆಮ್ಮೆಯ ಕೊಡುಗೆ  ಹಾಗು wix.com

Write Us

  • Grey Instagram Icon
  • Grey YouTube Icon
  • Grey Facebook Icon

Success! Message received.

bottom of page