
೦೧.ಶ್ರೀ ಬಸವೇಶ್ವರ ದಂಡಕ
ಬಸವೇಶನ ಒಂದು ಪಾದವ ರುದ್ರ ಪಿಡಿದನು
ಬಸವೇಶನ ಒಂದು ಪಾದವ ವಿಷ್ಣು ಪಿಡಿದನು
ಬಸವೇಶನ ಒಂದು ಪಾದವ ಬ್ರಹ್ಮ ಪಿಡಿದನು
ಬಸವೇಶನ ಒಂದು ಪಾದವ ತೆತ್ತೀಸಕೋಟಿ ದೇವತೆಗಳು ಪಿಡಿದರು
ಬಸವೇಶನೇ ಸಕಲ ಜಗವನು ನಾಲ್ಕು ಯುಗದಿ ಸಲಹುವನು
ನಂದಿ ಜಯ ಜಯ ಎನುತಲಿಪ್ಪರು
ಗಂಗಾ ಪಾರ್ವತಾದೇವಿಯರು ಬಸವೇಶನ ವಶಿಕರು
ಬಸವೇಶನ ಒಂದು ಪಾದ ಮಂದರಗಿರಿ ಪರ್ವತದ ತುದಿಯ ಮೇಲೆ
ಬಸವೇಶನ ಒಂದು ಪಾದ ಲಂಕಾದ್ರಿ ಪರ್ವತದ ಶಿಖರದ ಮೇಲೆ
ಬಸವೇಶನ ಒಂದು ಪಾದ ಸಿಂಹಳದ್ವೀಪದ ಗಡ್ಡೆಯ ಮೇಲೆ
ಬಸವೇಶನ ಒಂದು ಪಾದ ಜಂಬುದ್ವೀಪದ ಗಡ್ಡೆಯ ಮೇಲೆ
ಬಸವೇಶನ ನಾಲ್ಕು ಪಾದದಲಿ ನಾಲ್ಕು ವೇದಗಳು ಹುಟ್ಟಿದವು
ಅದು ಎಂತೆಂದೊಡೆ-ಯಜುರ್ವೇದ , ಋಗ್ವೇದ, ಸಾಮವೇದ, ಅಥರ್ವಣವೇದ
ಈ ನಾಲ್ಕು ವೇದಗಳು ಸ್ವರ್ಗ ಮತ್ಯ೯ ಪಾತಾಳದೊಳಗೆ ಇದ್ದ ವೇದಗಳಾಗಿ
ವಿಷ್ಣು ತಂದು ಬ್ರಹ್ಮನಿಗೆ ಕೊಟ್ಟನು
ಆ ಬ್ರಹ್ಮನು ತಂದು ಸರಸ್ವತಿಗೆ ಕೊಟ್ಟನು
ಆ ಸರಸ್ವತಿಯು ತಂದು ವಿಘ್ನೇಶ್ವರನಿಗೆ ಕೊಟ್ಟಳು
ಆ ವಿಘ್ನೇಶ್ವರನು ತಂದು ರೇವಣಸಿದ್ದೇಶ್ವರನಿಗೆ ಕೊಟ್ಟನು
ಆ ರೇವಣಸಿದ್ದೇಶ್ವರನು ತಂದು ಎನಗೆ ಕೊಟ್ಟನು
ನಾ ಮುಟ್ಟಿ ಹವಳಿಕ್ಕಿದೆ
ಎಂಟು ದಿಕ್ಕಿಗೆ ಎಂಟು ಜನ ದುರ್ಗೆಯರ ಕಾವಲವು
ಎಂಟು ದಿಕ್ಕಿಗೆ ಎಂಟು ಮದಕರಿಯ ಕಾವಲವು
ಎಂಟು ದಿಕ್ಕಿಗೆ ಎಂಟು ಶಾರ್ದೂಲರ ಕಾವಲವು
ನಡುವೆ ಸರ್ಪನ ಕಾವಲವು
ಮೂರುದಿನಕ್ಕೆ ಹುಟ್ಟಿದ ಗೊಲದೇವತೆಯ ಕಾವಲವು
ಆ ಗೊಲದೇವತೆಗೆ ನಳನ ಕಾವಲವು
ಆ ನಳನಿಗೆ ಈಶ್ಯಾನನ್ಯನ ಕಾವಲವು
ಆ ಈಶ್ಯಾನ್ಯನಿಗೆ ಇಂದ್ರನ ಕಾವಲವು
ಆ ಇಂದ್ರನಿಗೆ ಅಗ್ನಿಯ ಕಾವಲವು
ಆ ಅಗ್ನಿಗೆ ಯಮನ ಕಾವಲವು
ಆ ಯಮನಿಗೆ ನೈರುತ್ಯನ ಕಾವಲವು
ಆ ನೈರುತ್ಯನಿಗೆ ವರುಣನ ಕಾವಲವು
ಆ ವರುಣನಿಗೆ ಧನಪನ ಕಾವಲವು
ಆ ಧನಪನಿಗೆ ತೆಂಕಣ ದಿಕ್ಕಿನ ಲಂಕೆಯ ಹನುಮಂತನ ಕಾವಲವು
ಆ ಲಂಕೆಯ ಹನುಮಂತನಿಗೆ ಪೂರ್ವಭಾಗದ ಕಾಲೆಶನ ಕಾವಲವು
ಆ ಕಾಲೇಶನಿಗೆ ಮೋಕ್ಷ ಬ್ರಹ್ಮನ ಕಾವಲವು
ಆ ಮೋಕ್ಷ ಬ್ರಹ್ಮನಿಗೆ ಸರಸ್ವತಿಯ ಕಾವಲವು
ಆ ಸರಸ್ವತಿಗೆ ವೀರಭದ್ರನ ಕಾವಲವು
ಆ ವೀರಭದ್ರನಿಗೆ ಕಾಳಿಕಾದೇವಿಯ ಕಾವಲವು
ಆ ಕಾಳಿಕಾದೇವಿಗೆ ಪಾರ್ವತಿಯ ಕಾವಲವು
ಆ ಪಾರ್ವತಿಗೆ ಕೈಯೊಳಗೆ ಪಿಡಿದಿರ್ದ ತ್ರಿಶೂಲವೇ ಕಾವಲವು
ಆ ತ್ರಿಶೂಲ೦ಗೆ ಕೆಂಜೆಡೆಯ ಪರಮೇಶ್ವರನ ಕಾವಲವು
ಆ ಕೆಂಜೆಡೆಯ ಪರಮೇಶ್ವರನಿಗೆ ಏಕಮುಖದವರ ಕಾವಲವು
ಆ ಏಕಮುಖದವರಿಗೆ ದ್ವಿಮುಖದವರ ಕಾವಲವು
ಆ ದ್ವಿಮುಖದವರಿಗೆ ತ್ರಿಮುಖದವರ ಕಾವಲವು
ಆ ತ್ರಿಮುಖದವರಿಗೆ ಚತುರ್ಮುಖದವರ ಕಾವಲವು
ಆ ಚತುರ್ಮುಖದವನಿಗೆ ಪಂಚಮುಖದವರ ಕಾವಲವು
ಆ ಪಂಚಮುಖದವನಿಗೆ ಷಣ್ಮುಖದವರ ಕಾವಲವು
ಆ ಷಣ್ಮುಖದವರಿಗೆ ಸಪ್ತಮುಖದವರ ಕಾವಲವು
ಆ ಸಪ್ತಮುಖದವನಿಗೆ ಅಷ್ಟಮುಖದವರ ಕಾವಲವು
ಆ ಅಷ್ಟಮುಖದವರಿಗೆ ನವಮುಖದವರ ಕಾವಲವು
ಆ ನವಮುಖದವರಿಗೆ ದಶಮುಖದವರ ಕಾವಲವು
ಆ ದಶಮುಖದವರಿಗೆ ಏಕಮುಖದವರ ಕಾವಲವು
ಇಂತು ಕಾವಲವ ಕಟ್ಟಿ ಮೂರುಸಾರೆ ವಿಭೂತಿಯ ಮಂತ್ರಿಸಿ
ಪಣೆಯಲ್ಲಿ ಧರಿಸಿಕೊಂಡು ಸರ್ವ ಜಗದ ಮುಂದೆ ಹೋಗಲು
ಜನವಶ ಮುಖವಶವಾಗುವುದು
ಇಂತು ಅರವತ್ತಾರು ಕೋಟಿ ಭೂತ ಪ್ರೇತ ಪಿಶಾಚಿಗಳು
ಶಿಶುನಾಳಧೀಶನ ಕರುಣದಿಂದ ಬಿಟ್ಟು ಓಡುವುದು
ಗುರುನಾಥ ಗೋವಿಂದನ ಪಾದಸಾಕ್ಷಿ
ಓಂ ಶಾಂತಿ ಶಾಂತಿ ಶಾಂತಿಃ
ಹನುಮಂತ ಭೂಪ || ಪ ||
ಸದ್ಗುಣಮಣಿ ಶಾಂತಸ್ವರೂಪ
ಹನುಮಂತ ಮಹಾಮುನೀಶ ವಾಯು
ತನಯ ವಾನರೇಂದ್ರ ವನಚರೇಂದ್ರ || ಅ. ಪ. ||
ಶುಭಕಿರಣ ವಿಹಾರ ಮಹಿಮಾಗಾರ
ಅಂಜನೀಕುವರ ಸುಜನೋದ್ಧರ ಕುಜನೋತ್ಪಾಲನ
ಹೋ ಭಕ್ತ ಪ್ರಾಣ ಪಂಚಪ್ರಾಣ ನಮಸ್ತುತೆ
ಕ್ಷೋಣಿಪಾಲ ರಘುಚರಣ ಸೇವಕ ಕಪಿವರ ಕರುಣ ಕೃಪಾಳು
ಶರಣು ಮಾಂಪಾತು ಶರಣು ಶರಣೆ. ||೧||
ಹರಿ ರಾಮ ನಿರುಪಮ ನಿರಹಂಕಾರ ಚಾರಕ
ಚರಿತ ಭೂಪರೆ ಬಹುಭರದಿ ಲಂಕಾಪುರಕ್ಕೆ ಕಪಿಗಳ
ನೇರಪಿ ವಿಸ್ತಾರ ರಾವಣಾಸುರನ ನರುಹಿದ ಧೀರ
ಕುಂಭಕರ್ಣ ತಾಟಕಿಯ ದೂಷನ
ಕರಾದಿಗಳ ಸಂಹರ ಪರಾಕ್ರಮವೀರ ನಿನ್ನ ಶ್ರೀಕರ
ಚರಣಕಮಲಕೆ ಪರಾಕು ವಂದಿಪೆ ಶರಣು ಶರಣೈ. ||೨||
ಜಿತೇ೦ದ್ರಿಯ ಜಯ ಶುಭಮತಿ ಜಲಸ್ತಟ
ಪಥಸಾರ ನಿರ್ಮಿತ ನಿರಂತರ
ಹತಾಶ ದಾನವಪತೀಂದ್ರಜಿತುವಿನ ಮಥನ ಮೂರುತಿ ನತ
ವಿಭೀಷಣಗತಿ ಮುಕ್ತಿಯ ಪಥದಾಯಕ ಹಿತ ಸಹಾಯಕ
ವೃತಸ್ಥಂಭನ ಅತೀತ ಮಾರುತಿ ನುತಿಪೆ
ನಿನ್ನ ಪಾದಗತಿಯೆನುತ ಸರ್ವಥಾ ಸೇವಿಪೆ. ||೩||
ಬಲಾವಂತ ಬಾಲಕ ರಾಮಭೂಪಾಲ ರಘುವರ ಜಾಲ
ಲಲಾಮ ರಘುಕುಲ ರಾಮನ ಸೇವಕ
ಸಲುಹಿ ಸಮರದಿ ಕುಲ ಲಕ್ಷ್ಮಣನಿಗೊಲಿದು ಜೀವವನು ಉಳಿಸಿ
ಫಲಗೊಳಿಸಿ ಪಾತಾಳಕಿಳಿದು ಮಹಾ
ಮಲಿತ ಮೈರಾವಣ ರಕ್ಕಸರ ತುಳಿದೊತ್ತಿ ಲವ-ಕುಶ ಕುಮಾರರ
ಛಲಿಗೆಲಿಸಿ ಜಾನಕಿಯ ರಾಮ ಪದಕೊಪ್ಪಿಸಿದೈ ನಿಜ -
ಲಿಲಾಮೂರುತಿ ಭಲೆ ಬ್ರಹ್ಮಋಷಿ ಕುಲೋತ್ತಮಂ ಭಜೆ
ಬಾಲದಂಡ ಬಲಭೀಮ ದಯಾಳು. ||೪||
ಮಂಡಲೇಶ ಕೋದಂಡ ಹರಿವರ ಪಾಂಡುತನಯ
ಗಾಂಡೀವಿ ರಥಾಗ್ರದಿ ಕಂಡು ಪತಾಕಿನಿ ಕುಂಡು ಕುಂಡಲಿಯೋಳು ನಿನ್ನ
ಅಂಡಲಿಯಲು ಕುರುಸೈನ್ಯ ಕಲಹದೊಳು
ದಿಂಡುಗೆಡಸಿ ಬ್ರಹ್ಮಾಂಡಕ್ಕಿಳಿದು ಬಹು
ಪುಂಡಗ್ರಾಮ ಅತ್ತಿಗೇರಿ ಸ್ತಳದ ಪ್ರ_
ಚಂಡ ವೀರ ಹನುಮಂತಪ್ರಭು
ಉದ್ದಂಡ ಗುರುಗೋವಿಂದನ ಕರುಣದಿ
ಕಂಡುಸುರುವೆ ನಿನ್ನ ಪಾದಕಮಲ ಕರ
ದಂಡಯೆತ್ತಿ ನಮೋ ನಮೋ ಎಂಬೆನೈ. ||೫||
ಜಯ ಜಯತು ಜಗದಂಬೆ ಭಕ್ತರ ಕುಟುಂಬೆ || ಪ ||
ತ್ರಿಯಜಗವನೆಡಬಿಡದೆ ತುಂಬಿಕೊಂಬೆ
ನಯ ವಿನಯಗುಣ ಗಣ ಕದಂಬೆ
ಭಯ ಭಕ್ತಿಯಿಂ ಬೇಡಿಕೊಂಬೆ ಸಾಂಬೆ. || ಅ . ಪ ||
ಏನು ಇಲ್ಲದಲಂದು ಓಂಕಾರ ಪ್ರಣಮದಿ
ನೀನು ಮೂಲದಿ ಬಂದು
ಅ_ಉ_ಮಾಕಾರವೇ ಸಾನುರಾಗದಿ ನಿಂದು ಜ್ಞಾನಘನಸಿಂಧು
ತಾನೇ ಸ್ಥೂಲತಿಸೂಕ್ಷ್ಮಕಾರಣ
ಭಾನು ಬಹುರುಚಿ ವಿಶ್ವ ತ್ರೈಜಸ
ಮಾನ ಪ್ರಜ್ಞಾನೆನಿಸುವ ಜನನಿ
ಮೌನ ತಾವಸ ರಾಜಸ ಸತ್ವ ಏನು ಇಲ್ದಿರಲಾಗ
ಅಜ ವಿಷ್ಣು ರುದ್ರರು ನಿನ್ನ ಸ್ತುತಿಸಲು ಬೇಗ
ಪದರೇಣುವನು ಕೃಪೆಯಿಂದ ಪಾಲಿಸಿದಳಾಗ ಆನಂದರಾಗ
ಮಾನನಿಧಿ ಉತ್ಪತ್ತಿ ಸ್ಥಿತಿ ಲಯ
ಮೌನಮುದ್ರೆ ಸಮಾಧಿ ಭೇಧವು
ಭಾನುವಿನ ಓಲ್ ಬೆಳಗು ಮುಸುಗುವ_
ದೇನು ನಿನ್ನಾಧೀನ ತ್ರೈಜಗ
ನೀನೆ ನೀನೆಯು ತತ್ವ ಕಲ್ಪನೆ
ನೀನೆಯೆ೦ಬೆನು ಗಹನ ನಾನೆನೆ
ನಾ ರಹಿತ ನಿರಾಳದೇವಿಗೆ ಜಯ ಜಯತು ಜಗದಂಬೆ. || ೧ ||
ಓಂಕಾರಿ ಶರ್ವಾಣಿ ಅಖಿಳಾ೦ಡ ಜಗಮಯೆ
ಝೇಂಕಾರಿ ಸೂತ್ರಾಣಿ ಜಡ ಮೂಡ ಶುಂಭರ
ಹಂಕಾರಿ ನೀರ್ವಾಣಿ ಕಿಂಕರ ಪ್ರಾಣಿ
ಶಂಕರಿ ಶಿವೆ ಶಾಂಭವಿಯೆ೦ಬೆನಲು
ಭಿಂಕರಿಯು ಮಧುಕೈಟಬ್ರಾಂತಕಿ
ಓಂಕಾರಿ ಮಧುಪವೆ ರಕ್ತಬೀ_
ಜಾಂಕ ಮೂಲ ಕಾಲಭೈರವಿ
ಅಂಕ ವಿಜಯ ಶರಾಳಿ ಪ್ರತಿವೀರ_
ಗಂಕಣ ವಿಮಲ ಹಸ್ತಕರಾಳಿ ಕರಖಡ್ಗ ಶೂಲದಿ
ನೂ೦ಕಿ ಮಹಿಷನ ದಾಳಿ ಧೀ೦ಕರವತಾಳಿ
ಠೇ೦ಕರಿಸಿ ನಿಶಿಂಜಿನಿ ದ್ವನಿ
ಭೋಂಕರಿಸಿ ವರ ಸಿಂಹನಾದದಿ
ಕೇಂಕರಿಸಿ ಹರಿ ಹವಕೆ ಹಾರದಿ
ಮುಂಕರಿದು ಮೃತವಾದ ದನುಜರ
ಅಂಕಿಲಾಲ ಕಿಲಾಲ ಕಿಲಿಕಿಲಿ
ಕ್ಲಿಂ ಲಾಲವೆ ಮೂಲಜಾಲವೆ
ಓಂ ಕ್ಲಿಂ ಸೋಹಂ ಸರ್ವದೇವರ ದೇವಿಗೆ ಜಯ ಜಯತು ಜಗದಂಬೆ. || ೨||
ಸಕಲ ಲೋಕದ ಮಾತೆ ಮೂಲ ಪರಬ್ರಹ್ಮ
ಪ್ರಕೃತಿ ನಿನ್ನಿಂದಾಯ್ತೆ ಪಂಚಾದಿತತ್ವವು
ವಿಕೃತ ನಿನ್ನಿಂ ಪೋಯ್ತೇ ನೀಂ ಪೃಥ್ವಿ ದೇವತೆ
ಥಕ ಥಕನೆ ಕುಣಿಸಿದೀ ಜಗವಖಿಳ ಸೂತ್ರ ಬೊಂಬೆ ತೆರದಲಿ
ಸುಖ ವಿಲಾಸಿಯೆ ಬಹಳ ಮಾಯದಿ
ಪ್ರಕಟಿಸಿದೆ ಆಕಾಶ ನಿಮಿಷಕೆ
ಅಖಿಳ ವೇದಗಳನ್ನು ಇಂದ್ರಾದಿ ಸುರಮುನಿ
ನಿಖಳರೂಪಗಳಿರಿದ ಈರೇಳು ಭುವನದ
ಭಕ್ತವತ್ಸಲೆ ನೀನು ಮಂತ್ರಾದಿ ದೇವತೆ
ಚಕಿತಗುಣ ಗಣ ಚಂಚಢಾಳಿಯೆ
ರಕುತಬೀಜಾಂ ಸಂಹಾರಿಯೇ
ಕಕುಲತೆಯ ಮಹಮುಕ್ತಿ ದಾಯಕಿ
ಪ್ರಕಟ ಗುರುಗೋವಿಂದನಣುಗಗೆ
ಸುಖ ಸಾಯುಜ್ಯ ಕೊಡುವ
ಸಕಲ ದೇವಿಪಾದಕ ಜಯ ಜಯತು ಜಗದಂಬೆ. ||೩ ||
ಶ್ರೀರಮಣ ಸರ್ವೇಶ ವಾರಿಜದಳನಯನ
ಮಾರಹರಪಿತ ಮಂದಹಾಸ ವದನ
ಸಾರಿದೆನು ನಾ ನಿನ್ನ ಸಾಕ್ಷಾತ ಹರಿಚಕ್ರದ ರಮಣ
ಸಾರಿದೆನು ನಾ ನಿನ್ನ ದೂರದಲಿ ದ್ರೌಪದಿಯು ಕೃಷ್ಣ ಅಸು_
ರಾರಿ ಎಂದೊದರೆ ಅಭಿಮಾನವನು ಕಾಯ್ದೊ ಹರಿಯೆ. || ೧ ||
ವಿೂರಿದ ಕಾಡ್ಗಿಚ್ಚು ಪರಿಹರಿಸಿ ಗೋವುಗಳ
ಬಾರಿ ಬಾರಿಗೆ ಬಂದು ಭಯವ ಕಳದಿ
ಬಕಾಸುರನನ್ನು ಸಂಹರಿಸಿ ಶಟಕನನ್ನು ಮುರಿದೊತ್ತಿ
ಮಕರಾಕರ ಕಳ್ಳರನ್ನು ಕೊಂದು ವಿಕಟಪೂತನಿಯ ಕೊಂದು
ಗೋಕುಲ ನಗರಕೆ ಸಕಲ ಸಂತೋಷವಿತ್ತ ದೇವಾ. || ೨ ||
ಮುಕುಟಮರ್ಧನ ಮಾವ ಕಂಸನ ತಂಗಿ
ದೇವಕಿದೇವಿ ವಸುದೇವರುಗಳ ಸೆರೆಯ
ಮುಕ್ತ ಮಾಡಿ ಮುತ್ತಿಗೆಯ ಪಟ್ಟಗಟ್ಟಿಸಿದಿ
ಭಲೆರೆ ಭಲ ನಿನ್ನಾಟ ಗೋಪಿಯರ ಕೂಟ
ಗೊಲ್ಲರ ಕೂಡ್ಯಾಡಿ ಗೋವುಗಳ ಕಾಯ್ದಿ
ಬಲು ಕಳ್ಳರಕ್ಕಸರನು ಕಪಟದಲಿ ಕೊಂದು
ವಲ್ಲಭೆಯರು ಜಲಕ್ರೀಡೆಯನು ಆಡೆ ವಸ್ತ್ರವನು ಕಳ್ಳತನ_
ದಲ್ಲಿ ತಕ್ಕೊಂಡು ಗಿಡವನೇರಿದ ಬಲು ತುಂಟ
ಉಲ್ಲಾಸದಿಂದ ಸರ್ವ ಇಂಗಿತನೋಡಿ ಸರ್ವರಕೂಟ ಆಟವನ್ನಾಡಿದಿ
ಸಲ್ಲದು ನಿಮಗೆ ಲಕ್ಷ್ಮಿಕಾಂತಾ ಗೊಲ್ಲತಿಗಳಾಟ ಮಾಡಿದಿ ಮಾಟ. || ೩ ||
ದುರುಳ ದೈತ್ಯರನ ಕೊಂದು ನಾರಿಯರಿಗೆ ಒಲಿದೆ ನೀ
ನಿರಕಮಾಡಿ ಜಾಂಬುವಂತನೊಡನೆ
ತರಕಿಸುವ ಅಯೋದ್ಯ ತಪ್ಪದೆ
ಮುರಹರ ಕೌಸ್ತುಭಮಣಿ ಮುದ್ದುಕನ್ನಿಕೆಯರನ್ನು ಗ್ರಹಣಮಾದಿಡಿ
ದ್ವಾರಕಾವತಿಗಾಗಿ ಹರುಷದಿಂದಲಿ ಬಂದು ಹದನವನು ತಿಳಿದಿ
ಗಿರಿದರೆ ಕ್ಷೀರಸಾಗರ ನಿನ್ನ ಮಹಿಮೆ ಅರಿಯದಲ್ಲ
ಅರಿಯದೇ ಅಜನ ಸುರಪತಿಗಳು ಹರಲಿ ಹೊತ್ತರಲ್ಲ. || ೪ ||
ಕೊಳಲೂದಿ ಗೋಪಿಯರ ಕಾಮಪಾಶ ಕಟ್ಟಿಸಿದಿ
ಪ್ರಣಯದಲಿ ಬಗೆ ಬಗೆಗಳಿಂದ ಕೆಲವರ ಮುದ್ದಾಡಿ
ಕೆಲವರ ಕೂಡ ಭಯಗೊಳಿಸಿದಿ
ಬಲು ಕಾಮಕಲೆಗಳಿಂದ ನಳಿನಮುಖಿ ಋಷಿಪತ್ನಿಯರ ತಂದು
ಮೃಷ್ಟಾನ್ನವ ಮಾಡಿಸಿ ಗೆಳೆಯರ ಕೂಡ ಭೋಜನವ ಮಾಡಿ
ಕೆಳದಿಯರ ಕಾಮತೃಪ್ತಿಪಡಿಸಿ ಕಳಿಸಿದಿ ದೇವಾ
ಭಲೆ ಭಲೆರೆಲ ನಿನ್ನಾಟ ಮಾಡಿದಿ ಮಾಟ. || ೫ ||
ಗಿರಿಯನೆತ್ತಿ ಗೋಕುಲಪುರದಲ್ಲಿ ಸುರಿಮಳೆಯಗರದಿ
ಇಂದ್ರನಗರವ ಮುರಿದು ಸುರಪಾಂಡವರ ಅರಗಿನಮನಿಯಿಂದ
ಅರಣ್ಯದಲಿ ಆಜ್ಞಾತವಾಸ ಬೇಗ ಮುಗಿಸಿ ಅರಸುಗಳನ್ನು ಮಾಡಿ
ಸುರಪತಿಗಳೊಡನೆ ಯುದ್ದವನು ಸರಸದಿಂ ಮಾಡಿದ್ಯೋ
ಅದಕೆ ಅಧೋರ್ಯನು ನೀ ಪರಮನಲ್ಲವೇ
ಅರ್ಜುನನ ರಥಕೆ ತನುವನು ಅಂಗಿಕರಿಸಿದೆ ದೇವಾ ಶರಣು
ಶರಣು ನಿನ್ನಿಂದ ಪಾಂಡವರಿಗೆ ದೊರೆತನವ ಕೊಟ್ಟು
ಮುತ್ತಿಗೆಯ ಪಟ್ಟಗಟ್ಟಿಸಿ ಈರೈದು
ಅವತಾರಧರಿಸಿದ್ಯೋ ಭಕ್ತವತ್ಸಲ ಮುರಹರ ಕರುಣಾಂಕರ ನಿನ್ನ
ಮರೆಹೊಕ್ಕವರ ಪೊರೆದು ದುರಿತಕೋಟಲೆಗಳನ ಪರಿಹರಿಸಿದಿ ದೇವಾ. || ೬ ||
ಅಂದಹಸ್ಯನ ಕೊಂದು ವೇದವನು ತಂದಿ ಸೇತು
ನಂದಿಹತ್ತಿ ಆನಂದದಿ ಮಂದಾರಗಿರಿ ಬೆನ್ನಿನಲ್ಲಿ ಪೊತ್ತು ತಂದಿ
ಕಂದನ ಸಲುವಾಗಿ ಹಿರಣ್ಯಕಶ್ಯಪನ ಶೀಳಿ ಇಂದ್ರನಿಗಾಗಿ ಬಲೆ ಒಗೆದು ಸೀಳಿದಿ
ತಂದೆಯ ಮಾತು ಕೇಳಿ ತಾಯಿಯ ಶಿರವ ತೆರೆದಿ
ಬಂದ ಕಂಸನ ಭಯವ ಪರಿಹರಿಸಿದಿ ದೇವಾದಿ ದೇವಾ. || ೭ ||
ಕಲ್ಲು ಕಾಲಲಿ ತುಳಿದು ಕೋಮಲಾಂಗಿಯ ಮಾಡಿ
ಬಿಲ್ಲುಮುರಿದು ಸೀತೆಯನು ಬಿಂಕದಲಿ ಗೆದ್ದು
ಪಥದಲ್ಲಿ ಬರುವ ಪರಶುರಾಮನ ದೂರದಲಿ ಕಾಯ್ದಿ
ಉಲ್ಲಾಸವು ಪುರುಷ ಘ್ರತನವೆಂದು ತಿಳಿದು
ನಡೆಸಿದ್ಯೋ ಪಿತನಾಜ್ಞೆಯನು ಸಹೋದರರಿಗೆ ರಾಜ್ಯವನು ಕೊಟ್ಟು
ವಲ್ಲಬೆ ಸೀತೆಯೊಡನೆ ವನವ ಚರಿಸಿ
ಅಲ್ಲಿಂದ ರಾವಣನ ಹತಮಾಡಿ ಲಂಕೆಯನು ವಿಭೀಷಣನಿಗೆ ಪಟ್ಟಗಟ್ಟಿಸಿ ವಿಭೀಷಣನಿಗೆ
ಸೀತೆಯನು ಸಹಿತ ಅಯೋದ್ಯವನಾಳಿದ್ಯೊ
ಭಕ್ತವತ್ಸಲ ಬಿರುದಂಗೆ ದೇವಕಿಯಲಿ ವೇದವನು ಸ್ತುತಿಸಿ
ಸತ್ಯಭಾಮೆ ರುಕ್ಮಿಣಿಯರ ಪ್ರಪಂಚದೊಳು ಮತ್ಸರವ ಬೆಳೆಸಿ
ಕಲಹವಮಾದಿದ್ಯೋ ದೇವಾದಿ ದೇವಾ. || ೮ ||
ಬೌದ್ಧಾವತಾರದೊಳು ನಾರಿಯರ ಅಷ್ಟವೃತ ಕೆಡೆಸಿದ ರಕ್ಕಸರ ಕಡಿದಿ
ಆದಿಮೂರ್ತಿಯೆನಿಸಿದೆ ಅನೇಕ ಕಲಿಯಲಿ
ಭೇದಿಸಿ ಅಸುರರನು ಸೀಳಿ ಭುಭಾರವನಿಳುಹಿದಿ
ವೇದವನು ಸ್ತುತಿಸಲು ಕಡೆಗಾಗದೆ ನಿನ್ನ ಲಕ್ಷ್ಮಿಗೆ ತಿಳಿ_
ಯದಂತಾಯಿತು ಅಪರಿಮಿತ ನಿನ್ನ ಮಹಿಮೆ ಅನಂತಲೀಲೆಯ
ನಾಧರಿಸಿ ಎನ್ನ ಕಾಯ್ದಿರುವಿಯೋ ಗೋಪಾಲ. || ೯ ||
ಹೆತ್ತ ತಂದೆಯ ಮಗನನ್ನು ಹಿಡಿದು
ತೈಲದೊಳು ಬಿಸುಟಲು ಮತ್ತೆ ಕಾಯ್ದೋ ಹರಿಯೆ
ನಿತ್ಯ ಹಿರಣ್ಯಕಶಪ ಮಗನ ಬಾದಿಸಲು
ಕರ್ತು ಸಭೆಯೊಳಗೆ ಬಾಯಿ ಬಿಟ್ಟಿರಲು ಜಗ_
ದುರಿತ ದುಶ್ಯಾಸನನು ದ್ರೌಪದಿಯ ಮಾನವಂ ಕಳೆಯುತ್ತಿರಲು
ಕರ್ತು ನೀನಾಗಿ ಕಾಯ್ದೆ ಹರಿಯೆ. || ೧೦ ||
ತ್ರಯ ನಿನ್ನಾಧಿನ ತ್ರಯ ಪರಿಹಾರ
ತ್ರಯ ಕರುಣಾರ್ಜಿತನಾಗಿ ತ್ರಯ ವಿಕ್ರಮವಾಗಿ
ತ್ರಯ ಗುರುಗೋವಿಂದನಣುಗಗೆ ಸುಖ_
ಸಾಯುಜ್ಯ ಪದವಿಯನು ಕೊಡಿಸಿದ್ಯೊ
ತ್ರಯನಾದ ಗೋಪಾಲ ಎನ್ನ ಕಾಯ್ದರುವಿಯೋ ಹರಿಯೆ. || ೧೧ ||
ಅಂಬಾಗಾರತಿಯನ್ನು ರಂಭೆರು ಬೆಳಗಿರೆ || ಪ ||
ಶುಂಭ ನಿಶುಂಭರ ಸಂಹಾರಿಗೆ ಶಂಕರಿಗೆ
ಕುಂಭಕುಚ ಜಗದಂಬೆ ನಿನ ಪಾದ
ನಂಬಿಕೊಂಡೆನು ನರ ಶರೀರದಿ
ಆ೦ಬುಕೇಶನ ರಾಣಿ ಶರಣರ
ಬಿಂಬದೊಳು ನಲಿದಾಡು ಜನನಿ || ಅ. ಪ. ||
ಕೆಟ್ಟ ರಾಕ್ಕಸರನ್ನು ಮೆಟ್ಟಿ ಕುತ್ತಿಗೆ ಕೊಯ್ದು
ಸುಟ್ಟು ತ್ರಿಪುರ ಗೆದ್ದ ಶ್ರೀಕಾಂತೆಗೆ ಶಂಕರಿಗೆ
ಬ್ರಷ್ಟಮಹಿಷನ ಹೊಟ್ಟೆ ಬಗಿದು
ಬೆಟ್ಟ ಕೊಳ್ಳಕ ಇಳಿದು ರೇಣುಕಾ
ಸೃಷ್ಟಿಯೊಳು ಪಟ್ಟದ ಬ್ರಹ್ಮನ
ಶಿರವನ್ಹರಿಸಿದ ಪರಮ ಪಾರ್ವತಿ. || ೧||
ಹಿಂಡು ದೈತ್ಯರನೆಲ್ಲ ಚೆಂಡಾಡಿ ಕೊರಳೊಳು
ರುಂಡಮಾಲೆಯ ಧರಿಸಿದ ಚಾಮುಂಡಿಗೆ
ಮಂಡಲದಿ ಮೆರೆವ೦ಥ ಭಂಡರ
ತುಂಡುಮಾಡಿದ ಅಖಂಡ ದೇವತೆ
ಪುಂಡಳೇ ಶಿಶುನಾಳಧೀಶನ
ಕಂಡ ನಿನ್ನಯ ಪಾದನೇತ್ರದಿ. || ೨ ||